Saarike - 4 books and stories free download online pdf in Kannada

ಸಾರಿಕೆ - 4

ಸ್ವಲ್ಪ ಹೊತ್ತು ಮಲಗಿ ಎದೇಳುವಾಗ ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ
ಆಗ ಅವಳ ಕೈಯಲ್ಲಿ ಒಂದು ಉಂಗುರ ಪ್ರತ್ಯಕ್ಷವಾಗುತ್ತದೆ , ಅದರಿಂದ ಒಂದು ಕಮಲದ ಹೂ ಹೊರಗೆ ಬರ್ತ್ತದೆ .




ಸಾರಿಕೆಗೆ ಅಚ್ಚರಿಯಾಗುತ್ತದೆ , ಆ ಹೂ ಗಾಳಿಯಲ್ಲಿ ತೇಲುತ್ತಾ ಇತ್ತು ಮತ್ತು ಆ ಕಮಲದ ಹೂವಿನ ಸುಗಂದ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು . ಅದನ್ನು ಮುಟ್ಟಲು ಸಾರಿಕೆ ಕೈಯನ್ನು ಮುಂದೆ ಚಾಚುವ ಸಮಯಕ್ಕೆ ಆ ಹೂ ಒಂದು ಹುಡುಗಿ ರೂಪಕ್ಕೆ ಬರುತ್ತದೆ .









ಆ ಹುಡುಗಿ ಅಳುತ್ತಾ ಇರುತ್ತಾನಳೆ ...

ಸುರಭಿ ಅವನ ಅಳು ಕೇಳಲಾಗದೆ ,

" ಏ ಯಾಕೆ ಅಲ್ತಿದ್ದಿಯ " .

ಆ ಹುಡುಗಿ ಕಣ್ಣೀರು ಒರೆಸುತ್ತಾ ,

" ಒಡತಿ ನಾನು ನಿಮ್ಮ ಬ್ರಾಹ್ಮೀ ಶಕ್ತಿ , ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸ್ ಬೇಡಿ ; ನೀವು ಮತ್ತೆ ನನ್ನ ಆ ಲೋಕಕ್ಕೆ ಕಲಿಸಿದ್ರೆ , ನನ್ನನ್ನು ಅವರು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲವೆಂದು . ನನ್ನ ನಾಶ ಮಾಡ್ತಾರೆ , ದಯಮಾಡಿ ನನ್ನ ಕಳಿಸ್ ಬೇಡಿ ಒಡತಿ" .

ಎಂದು ಹೇಳಿ ಜೋರಾಗಿ ಅಳಲು ಶುರು ಮಾಡಿದಳು ,
ಅವಳ ಮಾತುಗಳ ಕೇಳಿ ಸುರಭಿಯು ಪ್ರಶ್ನಿಸುತ್ತಾಳೆ .

ನಿನ್ನ ಹೆಸರು ಏನು ??
ಅದು ಯಾವ ಲೋಕ ???
ಅವರು ಯಾಕೆ ನಿನ್ನನ್ನು ಸಾಯಿಸ್ತರೆ ?? .

ಆ ಹುಡುಗಿ ಅವಳ ಪ್ರಶ್ನೆಗಳಿಗೆ ಉತ್ತರಿಸಲು ಶುರು ಮಾಡಿದಳು .....

" ಮಿಂಚು ಅಂತ ನನ್ನ ಹೆಸರು , ನಾನು ವೀರ್ಯ ಲೋಕದಲ್ಲಿ ಇರುತ್ತೇನೆ , ಆ ಲೋಕದಲ್ಲೇ ಎಲ್ಲಾ ಬ್ರಾಹ್ಮೀ ಶಕ್ತಿಗಳು ವಾಸವಗಿರುವುದು . ಅಲ್ಲಿ ಒಂದು ನಿಯಮ ಇದೆ ಯಾವ ಮನುಷ್ಯ ಅವನ ಬ್ರಾಹ್ಮೀ ಶಕ್ತಿಯನ್ನು ಬೇಡ ಎಂದು ತಿರಸ್ಕರಿಸಿ ಮತ್ತೆ ಅದೇ ಲೋಕಕ್ಕೆ ಕಳುಯಿಸಿದರೆ , ಆ ಶಕ್ತಿಯನ್ನು ನಿಷ್ಕ್ರಿಯ ಮಾಡಲಾಗುತ್ತದೆ ಅಂದರೆ ಸಾಯಿಸಲಾಗುತ್ತದೆ " .

ಎಂದು ಹೇಳುತ್ತ ಕಣ್ಣೀರು ಸುರಿಸಲು ಪ್ರಾರಂಭಿಸುತ್ತಾಳೆ ..

ಅವಳ ಮಾತುಗಳ ಕೇಳಿ ಸುರಭಿಯು ಹೇಳುತ್ತಾಳೆ .

" ನೀನು ಕೇವಲ ಒಂದು ಹೂ , ನಿನ್ನಿಂದ ನನಗೆ ಏನೂ ಲಾಭ ".

ಮಿಂಚು ಅದನ್ನು ಕೇಳಿ ಜೋರಾಗಿ ಅಳುತ್ತಾ ಹೇಳುತ್ತಾಳೆ ,

" ಒಡತಿ ನಾನು ಸಸ್ಯ ಬ್ರಾಹ್ಮೀ ಶಕ್ತಿ , ನಾನು ವಿವಿಧ ರೋಗಗಳ ಗುಣ ಮಾಡುವ ಮದ್ದಿನ ಪರಿಚಯವಿದೆ . ಮತ್ತು ನನ್ನ ಕಮಲದ ಹೂವಿಂದ ದೊರೆಯುವ ಬೀಜ ಸೇವಿಸಿದರೆ ಅವರ ರಕ್ತದಲ್ಲಿ ಇರುವ ಎಲ್ಲ ಕಲ್ಮಷಗಳನ್ನು ದೂರಮಾಡುತ್ತದೆ . ಆಗು ನನ್ನ ಕಣ್ಣೀರನ್ನು ಔಷಧಿಯಾಗಿ ಸೇವಿಸಿದರೆ ರೋಗಗಳು ಗುಣವಾಗುದು ನನ್ನ ಅಂತಗಳು ಬದಲಾದಂತೆ ಇನ್ನೂ ಹೆಚ್ಚು ಶಕ್ತಿಯನ್ನು ಪಡೆಯುತ್ತೇನೆ . ದಯಮಾಡಿ ನನ್ನ ಪುನಃ ಆ ವೀರ್ಯ ಲೋಕಕ್ಕೆ ಕಲಿಸದಿರಿ " .

ಎಂದು ಹೇಳುತ್ತ ಅಳುತ್ತಾಳೆ ,
ಸುರಭಿ ಅವಳ ಅವಸ್ಥೆ ನೋಡಿ ಹೇಳುತ್ತಾಳೆ ....

ನೀನು ಎಲ್ಲಿಗೂ ಹೋಗುವ ಅಗತ್ಯ ಇಲ್ಲ , ಇಲ್ಲೇ ಇರು .

ಎಂದು ಹೇಳುತ್ತಾಳೆ .
ಅದನ್ನು ಕೇಳಿ ಮಿಂಚು ಖುಷಿಯಲ್ಲಿ ಕುಣಿದಾಡುತ್ತಳೆ , ಅದೇ ಸಂದರ್ಭಕ್ಕೆ ಯಾರೋ ಬಂದು ಬಾಗಿಲು ಬಡಿಯುತ್ತಾರೆ . ಅದನ್ನು ಕೇಳಿ ಸುರಭಿ ಮಿಂಚುಗೆ ಹೇಳುತ್ತಾಳೆ ,

ಮೊದಲು ಹೋಗು ಇಲ್ಲಿಂದ ಯಾರಾದರೂ ನಿನ್ನ ನೋಡಿದರೆ , ತೊಂದರೆಯಾಗುತ್ತದೆ .

ಎಂದು ಹೇಳಿದ ತಕ್ಷಣ ಮಿಂಚು ಉಂಗುರದ ಒಳಗೆ ಹೋಗುತ್ತಾಳೆ , ಸುರಭಿ ಹೊರಗೆ ಬಾಗಿಲು ಬಡಿಯುವವರನ್ನು

" ಒಳಗೆ ಬನ್ನಿ " .

ಎಂದು ಹೇಳುತ್ತಾಳೆ , ಹೊರಗೆ ಬಾಗಿಲು ಬಡಿಯುತ್ತಿದ್ದವರು ಒಳಗೆ ಬಂದರು . ಅದನ್ನು ನೋಡಿ ಅವಳಿಗೆ ಶಾಕ್ ಆಗುತ್ತದೆ , ಅದು ಬೇರೆ ಯಾರೂ ಅಲ್ಲ ಆ ಬೆಕ್ಕು ಮತ್ತು ಅದರ ಬಾಯಿಯಲ್ಲಿ ಒಂದು ಪಾತ್ರವಿತ್ತು , ಸುರಭಿ ಆ ಪಾತ್ರವನ್ನು ತೆಗೆದು ಕೊಳ್ಳುತ್ತಾಳೆ . ಆ ಬೆಕ್ಕು ಅವಳನ್ನು ದಿಟ್ಟಿಸುತ್ತಾ ,

" ಅದು ನನ್ನ ಒಡೆಯ ನಿನಗೆ ಕೊಡಲು ಹೇಳಿದರು" .

ಎಂದು ಹೇಳಿ ಅಲ್ಲಿಂದ ಹೋಗುತ್ತದೆ . ಸುರಭಿ ಆ ಪಾತ್ರವನ್ನು ಓದಲು ಎಂದು ತೆರೆಯುವಾಗ ಅಲ್ಲಿ ಅರ್ಯ ಬರುತ್ತಾನೆ .

ಏನು ಅತ್ತೆ ಮಗಳೇ , ಯಾರ ಪತ್ರವನ್ನು ಓದುತ್ತಿದ್ದಿಯ

ಎಂಬ ಮಾತು ಕೇಳಿ , ಬೆಚ್ಚಿ ಬಿದ್ದು ಅವನು ಇರುವ ಕಡೆ ತಿರುಗಿದಳು . ಸುರಭಿಯು ಅವನನ್ನು ನೋಡಿ ಕೋಪದಿಂದ ;

ನಿಂಗೆ ಯಾಕೆ ??

ಎಂದು ಹೇಳುತ್ತಾಳೆ . ಅವಳ ಕೋಪವನ್ನು ನೋಡಿ ಮುಗುಳು ನಗುತ್ತಾ

ಕೋಪ ಮಾಡ್ಕೋ ಬೇಡ ಅತ್ತೆ ಮಗಳೇ , ನಿನ್ನ ನೋಡೋಕೆ ಅಂತ ಬಂದೆ ಅಷ್ಟೇ . ನಿನ್ನ ಕೈಯಲ್ಲಿ ಇರುವ ಪತ್ರದ ಬಗ್ಗೆ ತಿಳಿಯುವ ಕುತೂಹಲ ನಂಗಿಲ್ಲ .

ಎಂದು ಹೇಳುತ್ತ ಅವಳನ್ನು ನೋಡಿ ಕಣ್ಣು ಹೊಡೆಯುತ್ತಾನೆ . ಅವನ ಮುಖವನ್ನು ನೋಡಿ ಏನು ಪ್ರತಿಕಿಯೆ ನೀಡದೆ ಆಸನದ ಮೇಲೆ ಕುಳಿತುಕೊಳ್ಳುತ್ತಳೆ , ಅಲ್ಲಿಂದ ಪತ್ರ ತೆಗೆದು ಓದಲೆಂದು ತೆರೆಯುವಾಗ . ಆರ್ಯ ಬಂದು ಅವಳ ಕೈಯಲ್ಲಿ ಇದ್ದ ಪತ್ರವನ್ನು ತೆಗೆದುಕೊಳ್ಳುತ್ತಾನೆ .

ಸುರಭಿ ಕೋಪದಿಂದ ಆರ್ಯ ಬಳಿ ಬಂದು

" ಕೊಡು ಆರ್ಯ , ನಂಗೆ ಪತ್ರ ಕೊಡು " .

ಎಂದು ಹೇಳಿ ಅವನ ಕೈಯಿಂದ ಪತ್ರ ಕಸಿದುಕೊಳ್ಳಲು
ಪ್ರಯತ್ನಿಸುತ್ತಾಳೆ . ಆರ್ಯ ಅವಳನ್ನು ನೋಡಿ ನಕ್ಕು ಅವಳಿಗೆ ಆ ಪತ್ರವನ್ನು ಪುನಃ ನೀಡಿ ಅಲ್ಲಿಂದ ಹೊರಟು ಹೋಗುತ್ತಾನೆ .

ಆರ್ಯ ಹೋಗುದನ್ನು ಖಾತರಿಪಡಿಸಿಕೊಂಡು , ಪತ್ರ ವನ್ನು ಓದಲು ತೆರೆಯುತ್ತಾಳೆ . ...............


( ಆ ಪಾತ್ರದಲ್ಲಿ ಅಂತ ಯಾವ ವಿಷಯವಿದೆ ???? .
ಮಿಂಚುವಿನ ಶಕ್ತಿ ಸುರಭಿಗೆ ಯಾವ ರೀತಿ ಸಹಾಯ ಮಾಡಬಹುದು ???? ..... 18 ವರ್ಷದಿಂದ ಹಾಸಿಗೆಯಲ್ಲೆ ಇರುವ ವಾಸುದೇವ ನನ್ನು ಹೇಗೆ ಸರಿ ಮಾಡುತ್ತಾಳೆ ?? ... )